Tuesday, 1 October 2013

"ಖುಚ್ ಪಾನೇಕೇಲಿಯೆ ಖುಚ್ ಖೋನಾ ಪಡತಾ ಹೈ" ಈ ಮಾತು ನಿಜವಾ ???

                 ಯಾವುದೇ ಒಂದು ವಸ್ತು, ವ್ಯಕ್ತಿಯನ್ನು ಅಥವಾ ಕೆಲಸವನ್ನು ಕಳೆದುಕೊಂಡಮೇಲೆ ಇರಬಹುದು ಅದರ / ಅವರ ಬೆಲೆಯ ಅರಿವಾಗುವುದು ...  ನಾವು ಸಮಯ  ನಮ್ಮ ಕೈಯ್ಯಲ್ಲಿ ಇರುವಾಗ  ಸರಿಯಾಗಿ ಉಪಯೂಗಿಸಿಕೊಳ್ಳದೇ ವಸ್ತು ಅಥವಾ ವ್ಯಕ್ತಿ ನಮ್ಮ ಕೈಜಾರಿದ ಮೇಲೆ ಅವರಿಗಾಗಿ ಹಾತೊರೆದರೆ ಮತ್ತೇ ಸಿಗಬಹುದಾ ??? ಆಕಸ್ಮಾತ್ ಸಿಕ್ಕರೂ ಈಗಿರುವ ಹೊಂದಾಣಿಕೆ ಆವಾಗಲೂ ಇರಬಹುದಾ???? ದೇವರು ನಮಗೆ ತುಂಬಾ ಅವಕಾಶ ಕೊಡುವುದಿಲ್ಲ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳದೆ, ಆಮೇಲೆ  ದೇವರನ್ನು ಕೇಳಿದರೆ ಅವನೇನು ಮಾಡಿಯಾನು ಪಾಪ ??  ಅವನಿಗೆ ನಮ್ಮನ್ನು ಮತ್ತು  ಬೇಡಿಕೆಗಳನ್ನು  ನೋಡಿಕೊಳ್ಳುವುದೊಂದೇ  ಕೆಲಸವಲ್ಲವಲ್ಲ...!!   ಎಂಬೆಲ್ಲಾ ದ್ವಂಧ್ವಗಳ ನಡುವೆಯೂ , ಮನಸ್ಸಲ್ಲೊಂದು ನಿರ್ಧಾರ ಧೃಡವಾಗುತ್ತಿದೆ...

"ಖುಚ್ ಪಾನೇಕೇಲಿಯೆ ಖುಚ್ ಖೋನಾ ಪಡತಾ ಹೈ"  ಈ ಮಾತು ನಿಜವಾ ?? ಗೊತ್ತಿಲ್ಲ ..
ಏನನ್ನು ಪಡೆದುಕೊಳ್ಳುತ್ತೇನೆ ಎಂದು ತಿಳಿದುಕೊಳ್ಳುವುದರ ಮೊದಲೇ ಇನ್ನೇನೋ  ಕಳೆದುಕೊಳ್ಳಲು ತಯಾರಾಗಿಯಾಗಿದೆ.......
  

No comments:

Post a Comment

Search This Blog